ಎಸ್.ಕೆ.ಫ಼ಿಲಂಸ್ ಲಾಂಛನದಲ್ಲಿ ಬಿ.ಕೆ.ಶ್ರೀನಿವಾಸ್ ಅರ್ಪಿಸುವ ನವಿರಾದ ಪ್ರೇಮ ಕಥಾನಕ ‘ಪ್ರೀತಿಸಿ ಹೊರಟವಳೇ’ಗೆ ಚಿತ್ರೀಕರಣ ಹಾಗೂ ಚಿತ್ರೀಕರಣ ನಂತರದ ಚಟುವಟಿಕೆಗಳು ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ.
ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ನಾಯಕಿ ಮಾಡಿದ ಚಿಕ್ಕ ಸಹಾಯದಿಂದ ನಾಯಕನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬ ಎಳೆಯಿಂದ ಕಥೆ ಸಾಗುತ್ತದೆ.
ಅಶ್ವಿನಿ ಮೀಡಿಯಾ ನೆಟ್ವರ್ಕ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ ಕುಮಾರ್ಗೋವಿಂದ್.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಗೌತಮ್ಶ್ರೀನಿವಾಸ್ ಸಂಗೀತ ನೀಡಿದ್ದಾರೆ. ನಿರ್ದೇಶಕ ಪ್ರೇಮ್, ಅನೂಪ್, ಅನುರಾಧಾಭಟ್, ಮಧುಬಾಲಕೃಷ್ಣ ಹಾಗೂ ಟಿ.ವಿ.ಕೃಷ್ಣ ಚಿತ್ರದ ಗೀತೆಗಳನ್ನು ಹಾಡಿದ್ದಾರೆ.
ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಣಿಕೊಂಡಿರುವುದಲ್ಲದೆ, ಒಂದು ಹಾಡನ್ನೂ ಬರೆದಿದ್ದಾರೆ. ಉಳಿದ ಗೀತೆಗಳನ್ನು ಕುಮಾರ್ಗೋವಿಂದ್, ಹರೀಶ್ ಹಾಗೂ ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ರವಿ ಸಂಕಲನವಿರುವ ಈ ಚಿತ್ರಕ್ಕೆ ರಂಗಾ ಅವರ ಛಾಯಾಗ್ರಹಣವಿದೆ. ಕುಮಾರ್ಗೋವಿಂದ್, ಡಿಂಪಲ್, ಪದ್ಮಾವಾಸಂತಿ, ಸುಂದರರಾಜ್, ಬ್ಯಾಂಕ್ಜನಾರ್ದನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಊಟಿ, ಕುಂದಾಪುರ, ನಂದಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರಕ್ಕೆ ಇಪ್ಪತ್ತೇಳು ದಿನಗಳ ಚಿತ್ರೀಕರಣ ನಡೆದಿದೆ.